Friday, December 15, 2006

ಭಾವಗೀತೆ:ಯಾವ ಸುಮಧುರ ಯಾರ ಕವಿತೆಯೋ...

ಯಾವ ಸುಮಧುರ ಯಾರ ಕವಿತೆಯೋ
ಡಾ ಜಿ.ಎಸ್.ಶಿವರುದ್ರಪ್ಪ

ಯಾವ ಸುಮಧುರ್ ಯಾರ ಕವಿತೆಯೋ
ಹೃದಯವನ್ನು ಸೆಳೆದಿದೆ
ಯಾವ ಗೀತೆಯ ಗುಂಗಿಗೋ ಮನವು ಸೋತಿದೆ

ಕಮರಿ ಹೋದ ಕನಸು ಮತ್ತೆ ಚಿಗುರಿ ಅರಳಿದೆ
ಏಕೋ ಏನೋ ಒಳಗಿನಾಸೆ
ಒರಳಿದೆ ಹೊಸ ಭಾವದೆಡೆಗೆ
ಮುರಿದ ವೀಣೆ ಮುರಿದು ಮೌನ
ನುಡಿಯುವಂತೆ ಆಗಿದೆ

ಮುಗಿಲಿನಾಚೆ ಸುಳಿವ ಮಿಂಚು
ಎದೆಗೆ ಇಳಿದಿದೆ
ದೀಪದಂತೆ ಉರಿದೆ ನಾನು ಕವಿತೆಯ ನವಿರಾದ ಕಡೆಗೆ
ಒಣಗಿನಿಂತ ಬಳ್ಳಿಯಲ್ಲು
ಜೀವರಸವು ಚಿಮ್ಮಿದೆ

ಭಾವಗೀತೆ:ಎದೆ ತುಂಬಿ ಹಾಡಿದೆನು


ಎದೆ ತುಂಬಿ ಹಾಡಿದೆನು
-ಜಿ.ಎಸ್.ಶಿವರುದ್ರಪ್ಪ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನೆಗೆ ಅದುವೆ ಬಹುಮಾನ್
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಅಂದು ನಾನು
ಎದೆ ತುಂಬಿ, ಮನ ತುಂಬಿ, ತನು ತುಂಬಿ
ಹಾಡಿದೆನು ಅಂದು ನಾನು

ಭಾವಗೀತೆ: ಮುಂಗಾರಿನ ಅಭಿಷೇಕಕೆ...


ಮುಂಗಾರಿನ ಅಭಿಷೇಕ
- ಜಿ.ಎಸ್.ಶಿವರುದ್ರಪ್ಪ

ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲಿ ಪುಟಿದೆದ್ದಿತು ಚೆಲುವು//

ಬಾಯಾರಿದ ಬಯಕೆಗಳಲಿ ತಳತಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿ ಅಂತ ಹಸಿರು//

ಮೈ-ಮನಗಳ ಕೊಂಬೆಯಲಿ ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ ಕನಸಿನ ಅರಳುವ ಹೂ ಕಂಪು//

ಭರವಸೆಗಳ ನೇಗಿಲ ಗೆರೆಗಳೆ ಕವನ
ಶ್ರಾವಣದಲಿ ಹೊಲಗಳಲ್ಲಿ ತೆನೆದೂಗುವ ಜೀವನೋತ್ಸಾಹ ಗಾನ//

Wednesday, December 13, 2006

ಕನ್ನಡ ಸಾಹಿತ್ಯ ಡಾಟ್ ಕಾಮ್ ತುಮಕೂರು


ಕನ್ನಡದ ಬಗ್ಗೆ ರಸ್ತೆಯಲ್ಲಿ ಘೋಷಣೆ ಹಾಕುವುದಕ್ಕಿಂತ ಕಂಪ್ಯೂಟರ್ ಮೂಲಕ ಕನ್ನಡದ ಕಂಪನ್ನು ಇಡೀ ಜಗತ್ತಿಗೆ ಪಸರಿಸುವಂತೆ ಮಾಡಿರುವ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಪರಿಶ್ರಮವು ಬಹುದೊಡ್ಡ ಕನ್ನಡ ಸೇವೆಯಾಗಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಮುಕ್ತಕಂಠದಿಂದ ವರ್ಣಿಸಿದರು.
ಅವರು ದಿನಾಂಕ ೯.೧೨.೨೦೦೬ ರಂದು ಭಾನುವಾರ ಬೆಳಿಗ್ಗೆ ತುಮಕೂರು ನಗರದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ತುಮಕೂರು ಬೆಂಬಲಿಗರ ಬಳಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೂರದ ಅಮೇರಿಕದಲ್ಲಿ ಕುಳಿತು `ಬರಹ` ಕನ್ನಡ ತಂತ್ರಾಂಶ ರೂಪಿಸಿ ಉಚಿತವಾಗಿ ಬಳಕೆಗೆ ನೀಡಿರುವ ಶೇಷಾದ್ರಿವಾಸು ಚಂದ್ರಶೇಖರನ್ ಮತ್ತು ಕನ್ನಡ ಸಾಹಿತ್ಯ ಡಾಟ್ ಕಾಮ್ ರೂಪಿಸಿ ಕನ್ನಡ ಸಾಹಿತ್ಯದ ಕಂಪನ್ನು ಜಗತ್ತಿಗೆ ಪರಿಚಯಿಸುತ್ತಿರುವ ಬೆಂಗಳೂರಿನ ಶೇಖರ್ ಪೂರ್ಣ ಅವರು ಬಹುದೊಡ್ಡ ಕನ್ನಡ ಸೇವೆ ಮಾಡುತ್ತಿದ್ದಾರೆ. ಅಲ್ಲದೆ ಸರ್ಕಾರದ ಮುಂದೆ ಕೈಚಾಚದಿರುವುದು ಇವರಿಬ್ಬರ ದೊಡ್ಡಗುಣ ಎಂದು ಮೆಚ್ಚುಗೆಯಿಂದ ನುಡಿದರು. ಇಂದು ೯೦ ಕ್ಕೂ ಹೆಚ್ಚು ಕನ್ನಡದ ಬರಹಗಾರರ ೩೦೦ ಕ್ಕೂ ಅಧಿಕ ಕೃತಿಗಳು ವೆಬ್ ಸೈಟ್ ಮೂಲಕ ಇಡೀ ಜಗತ್ತಿಗೇ ಲಭ್ಯವಾಗುವಂತೆ ಮಾಡಿರುವುದು ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಅದ್ಭುತ ಸಾಧನೆಯಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತು ಇಂಟರ್ ನೆಟ್ ಮೂಲಕ ಈ ಕೃತಿಗಳನ್ನು ಓದಬಹುದಾಗಿದೆ ಎಂದು ಹೇಳಿದ ಅವರು, ಬದಲಾಗುತ್ತಿರುವ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ಕನ್ನಡಕ್ಕೆ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದರು. ಜಗತ್ತಿನಲ್ಲಿ ವೇಗವಾಗಿ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಒಂದೆಂಬ ವರದಿಯೊಂದನ್ನು ಉಲ್ಲೇಖಿಸಿದ ಶೇಷಾದ್ರಿ, ಇಂದು ಕರ್ನಾಟಕ ಸರ್ಕಾರವು ಎಲ್ಲ ಪ್ರಾಥಮಿಕ ಶಾಲೆಗಳ ಕಂಪ್ಯೂಟರ್‌ಗಳಲ್ಲೂ ಉಚಿತವಾಗಿ ಲಭ್ಯವಿರುವ ಬರಹ ಮತ್ತು ನುಡಿ ತಂತ್ರಾಂಶಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಸಂಸ್ಥಾಪಕರೂ, ಸಂಪಾದಕರೂ ಆದ ಶೇಖರ್ ಪೂರ್ಣ ಅವರು ಮಾತನಾಡಿ, ಕಂಪ್ಯೂಟರ್ ಮಾಧ್ಯಮದಲ್ಲಿ ಇಂದು ಕನ್ನಡ ಮೃತ ಭಾಷೆಯಾಗಿದೆ ಎಂದು ಆತಂಕದಿಂದ ನುಡಿದರು.
ಕನ್ನಡದಲ್ಲಿ ಇನ್ನೂ ಹೊಸ ತಂತ್ರಾಂಶಗಳು ರೂಪುಗೊಳ್ಳಬೇಕಿದ್ದು, ತಂತ್ರಜ್ಞರು ಹಾಗೂ ತಾಂತ್ರಿಕ ಕಾಲೇಜುಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲಗೊಳ್ಳಬೇಕಿದೆ. ಪ್ರಾಥಮಿಕ ಶಾಲೆಯಲ್ಲೇ ಕನ್ನಡ ಪರಿಸರ ರೂಪಿಸಿ, ಕಂಪ್ಯೂಟರ್‌ನಲ್ಲಿ ಕನ್ನಡ ಸಾಧ್ಯತೆಗಳನ್ನು ಮಕ್ಕಳ ಮುಂದೆ ತೆರೆದಿಡಬೇಕು. ಬರಹ ಮತ್ತು ನುಡಿ ತಂತ್ರಾಂಶವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ರಾಜ್ಯದಲ್ಲಿ ಮಾರಾಟವಾಗುವ ಕಂಪ್ಯೂಟರ್‌ಗಳಲ್ಲಿ ಕನ್ನಡದ ಇವೆರಡು ಉಚಿತ ತಂತ್ರಾಂಶಗಳನ್ನು ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು. \nತಂತ್ರಜ್ಞಾನವನ್ನು ಜನರ ಬಳಿಗೆ ತರುವಷ್ಟೇ ಪ್ರಮುಖವಾಗಿ ಜನರ ಭಾಷೆಯನ್ನೂ ಅದರಲ್ಲಿ ಅಳವಡಿಸಬೇಕು . ಆಗ ಮಾತ್ರ ಅದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ಒತ್ತಿ ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಶ್ರೀ ಸಿದ್ಧಾರ್ಥ ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ಕರುಣಾಕರ್ ಅವರು ಮಾತನಾಡಿ, ತಮ್ಮ ಕಾಲೇಜಿನಲ್ಲಿ ಈಗಾಗಲೇ ಕನ್ನಡ ಬ್ರೌಸರ್ ಬಗ್ಗೆ ಸಂಶೋಧನೆ ಮಾಡಿದ್ದು, ಅದು ಪ್ರಗತಿಯ ಹಂತದಲ್ಲಿದೆ ಎಂದರು. \nಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣ, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಆರ್.ಎಸ್.ಸದಾನಂದ, ನೀರಾವರಿ ತಜ್ಞ ಸಂಪಿಗೆ ಜಗದೀಶ್, ಎಚ್.ಎಂ.ಎಸ್. ತಾಂತ್ರಿಕ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್. ಕೆ. ನಾರಾಯಣ, ಎಸ್.ಬಿ.ಎಂ. ಅಧಿಕಾರಿಗಳ ಒಕ್ಕೂಟದ ಕೊಪ್ಪಲ್ ನಾಗರಾಜ್, ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಮುಖ್ಯ ಅತಿಥಿಗಳಾಗಿ ಮಾತನಾಡಿ , ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಸಾಧನೆ - ಪರಿಶ್ರಮಗಳನ್ನು ಶ್ಲಾಘಿಸಿ, ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ನಿರ್ದೇಶಕರಾದ ಡಾ ಎಂ.ಎನ್. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ತಂತ್ರಜ್ಞ ಅರೆಹಳ್ಳಿ ರವಿ ಅವರು ಬರಹ ಬಗ್ಗೆ ಪ್ರಾತ್ಯಕ್ಷತೆ ಯೊಂದಿಗೆ ವಿವರಿಸಿದರು. ಸಂಚಾಲಕರಾದ ಎಂ.ಎನ್. ಕೋಟೆ ನಾಗಭೂಷಣ್ ಸ್ವಾಗತಿಸಿದರು. ಸಂಚಾಲಕ ಆರ್.ಎಸ್. ಅಯ್ಯರ್ ಕಾರ್ಯಕ್ರಮ ನಿರೂಪಿಸಿದರು. ಹಾಲಿ ಇಂಗ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಿವಾಸಿ ಸಿ.ವಿ. ಸತೀಶ್ ಅವರು ಸ್ವಯಂ ಆಸಕ್ತಿಯಿಂದ ಆಗಮಿಸಿ, ಮಾತನಾಡಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ನೂರಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದರು. \n-- ವಂದನೆಗಳೊಂದಿಗೆ.... Arehalli RaviI pledge myself to the cause of http://www.kanlit.com\n and http://www.kannadasaahithya.com \n",0]
);
//-->
ಕನ್ನಡದಲ್ಲಿ ಇನ್ನೂ ಹೊಸ ತಂತ್ರಾಂಶಗಳು ರೂಪುಗೊಳ್ಳಬೇಕಿದ್ದು, ತಂತ್ರಜ್ಞರು ಹಾಗೂ ತಾಂತ್ರಿಕ ಕಾಲೇಜುಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲಗೊಳ್ಳಬೇಕಿದೆ. ಪ್ರಾಥಮಿಕ ಶಾಲೆಯಲ್ಲೇ ಕನ್ನಡ ಪರಿಸರ ರೂಪಿಸಿ, ಕಂಪ್ಯೂಟರ್‌ನಲ್ಲಿ ಕನ್ನಡ ಸಾಧ್ಯತೆಗಳನ್ನು ಮಕ್ಕಳ ಮುಂದೆ ತೆರೆದಿಡಬೇಕು. ಬರಹ ಮತ್ತು ನುಡಿ ತಂತ್ರಾಂಶವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ರಾಜ್ಯದಲ್ಲಿ ಮಾರಾಟವಾಗುವ ಕಂಪ್ಯೂಟರ್‌ಗಳಲ್ಲಿ ಕನ್ನಡದ ಇವೆರಡು ಉಚಿತ ತಂತ್ರಾಂಶಗಳನ್ನು ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು. ತಂತ್ರಜ್ಞಾನವನ್ನು ಜನರ ಬಳಿಗೆ ತರುವಷ್ಟೇ ಪ್ರಮುಖವಾಗಿ ಜನರ ಭಾಷೆಯನ್ನೂ ಅದರಲ್ಲಿ ಅಳವಡಿಸಬೇಕು . ಆಗ ಮಾತ್ರ ಅದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ಒತ್ತಿ ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಶ್ರೀ ಸಿದ್ಧಾರ್ಥ ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ಕರುಣಾಕರ್ ಅವರು ಮಾತನಾಡಿ, ತಮ್ಮ ಕಾಲೇಜಿನಲ್ಲಿ ಈಗಾಗಲೇ ಕನ್ನಡ ಬ್ರೌಸರ್ ಬಗ್ಗೆ ಸಂಶೋಧನೆ ಮಾಡಿದ್ದು, ಅದು ಪ್ರಗತಿಯ ಹಂತದಲ್ಲಿದೆ ಎಂದರು. ಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣ, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಆರ್.ಎಸ್.ಸದಾನಂದ, ನೀರಾವರಿ ತಜ್ಞ ಸಂಪಿಗೆ ಜಗದೀಶ್, ಎಚ್.ಎಂ.ಎಸ್. ತಾಂತ್ರಿಕ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್. ಕೆ. ನಾರಾಯಣ, ಎಸ್.ಬಿ.ಎಂ. ಅಧಿಕಾರಿಗಳ ಒಕ್ಕೂಟದ ಕೊಪ್ಪಲ್ ನಾಗರಾಜ್, ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಮುಖ್ಯ ಅತಿಥಿಗಳಾಗಿ ಮಾತನಾಡಿ , ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಸಾಧನೆ - ಪರಿಶ್ರಮಗಳನ್ನು ಶ್ಲಾಘಿಸಿ, ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ನಿರ್ದೇಶಕರಾದ ಡಾ ಎಂ.ಎನ್. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ತಂತ್ರಜ್ಞ ಅರೆಹಳ್ಳಿ ರವಿ ಅವರು ಬರಹ ಬಗ್ಗೆ ಪ್ರಾತ್ಯಕ್ಷತೆ ಯೊಂದಿಗೆ ವಿವರಿಸಿದರು. ಸಂಚಾಲಕರಾದ ಎಂ.ಎನ್. ಕೋಟೆ ನಾಗಭೂಷಣ್ ಸ್ವಾಗತಿಸಿದರು. ಸಂಚಾಲಕ ಆರ್.ಎಸ್. ಅಯ್ಯರ್ ಕಾರ್ಯಕ್ರಮ ನಿರೂಪಿಸಿದರು. ಹಾಲಿ ಇಂಗ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಿವಾಸಿ ಸಿ.ವಿ. ಸತೀಶ್ ಅವರು ಸ್ವಯಂ ಆಸಕ್ತಿಯಿಂದ ಆಗಮಿಸಿ, ಮಾತನಾಡಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ನೂರಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದರು.

Monday, December 11, 2006

ತಾಜ್ ಮಹಲ್


ತಾಜ್ ಮಹಲ್ ವಿಶ್ವದ ಅದ್ಭುತಗಳಲ್ಲಿ ಒಂದು. ಇದನ್ನು ಕಟ್ಟಿಸಿದವನು ಶಹಜಹಾನ್. ಅವನು ತನ್ನ ಪ್ರೇಯಸಿ ಮಮ್ತಾಜ್ ಗಾಗಿ ಕಟ್ಟಿಸಿದ. ಇದು ಅಮರುತ ಶಿಲೆಗಳಿಂದ ಕೂಡಿದೆ.

ಅರಮನೆ


ಮ್ಯಸೂರು ಅರಮನೆ ಜಗತ್ಪ್ರಸಿದ್ಧವಾದುದು. ದಸರಾ ಹಬ್ಬದ ವೇಳೆ ಇದನ್ನು ದೀಪಾಲಂಕಾರಗಳಿಂದ ಸಿಂಗರಿಸಿದಾಗ ಇನ್ನೂ ಹೆಚ್ಚು ಮನಮೋಹಕವಾಗಿ ಕಾಣಿಸುತ್ತದೆ.

Sunday, December 10, 2006

ಹಾಯ್!

ಹಲೋ
ನನ್ನ ಹೆಸರು ಸಿದ್ದು ಅಂತ. ನನಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ನನ್ನ ಬ್ಲಾಗ್: bavajeevi.blogspot.com ನಲ್ಲಿ ಪಬ್ಲಿಷ್ ಮಾಡುತ್ತೇನೆ. ಆದ್ದರಿಂದ ನೀವೂ ಸಹ ನಿಮಗಿಷ್ಟವಾದ ಸುಮಧುರ ಕವಿತೆ, ಸದಭಿರುಚಿಯ ಜೋಕ್, ಅಪರೂಪದ ಅಥವಾ ಸಂಗ್ರಹ ಯೋಗ್ಯ ಫೋಟೋಗಳು ಮತ್ತು ಉತ್ತಮ ಮಾಹಿತಿಗಳನ್ನು ನನ್ನ e-mail ಗೆ ಕಳುಹಿಸಿಕೊಡಿ.[siddurghalli@gmail.com siddurghalli@rediffmail.com ]

ನಿಮ್ಮವ
ಎನ್.ಸಿದ್ದು