Friday, December 15, 2006

ಭಾವಗೀತೆ:ಯಾವ ಸುಮಧುರ ಯಾರ ಕವಿತೆಯೋ...

ಯಾವ ಸುಮಧುರ ಯಾರ ಕವಿತೆಯೋ
ಡಾ ಜಿ.ಎಸ್.ಶಿವರುದ್ರಪ್ಪ

ಯಾವ ಸುಮಧುರ್ ಯಾರ ಕವಿತೆಯೋ
ಹೃದಯವನ್ನು ಸೆಳೆದಿದೆ
ಯಾವ ಗೀತೆಯ ಗುಂಗಿಗೋ ಮನವು ಸೋತಿದೆ

ಕಮರಿ ಹೋದ ಕನಸು ಮತ್ತೆ ಚಿಗುರಿ ಅರಳಿದೆ
ಏಕೋ ಏನೋ ಒಳಗಿನಾಸೆ
ಒರಳಿದೆ ಹೊಸ ಭಾವದೆಡೆಗೆ
ಮುರಿದ ವೀಣೆ ಮುರಿದು ಮೌನ
ನುಡಿಯುವಂತೆ ಆಗಿದೆ

ಮುಗಿಲಿನಾಚೆ ಸುಳಿವ ಮಿಂಚು
ಎದೆಗೆ ಇಳಿದಿದೆ
ದೀಪದಂತೆ ಉರಿದೆ ನಾನು ಕವಿತೆಯ ನವಿರಾದ ಕಡೆಗೆ
ಒಣಗಿನಿಂತ ಬಳ್ಳಿಯಲ್ಲು
ಜೀವರಸವು ಚಿಮ್ಮಿದೆ

2 comments:

ಅರೇಹಳ್ಳಿ ರವಿ said...

ಸಿದ್ದು,

ಕಾಫಿರೈಟಿಲ್ಲದೆ ಹಾಗೆಲ್ಲ ನಾವು ಬೇರೆಯವರ ಕವನಗಳನ್ನು ಹಾಕಬಾರದು....ಅದು ಸೈಬರ್ ಅಪರಾಧವೂ ಆಗುತ್ತದೆ....
ಕವಿಯ ಅನುಮತಿ ಪತ್ರ ಇದ್ದರೆ...ಸರಿ....ನಿನ್ನ ಕೃತಿಗಳಿದ್ದರೆ.... ಹಾಕಿದರೆ ಚೆನ್ನಾಗಿರುತ್ತದೆ....
ಜಿ ಎಸ್ ಎಸ್‌ರವರ ಕವನಗಳನ್ನು ಆದಷ್ಟು ಬೇಗ ತೆಗೆದುಹಾಕಿದರೆ ಒಳ್ಳೆಯದು....!

ಅಲೆಮಾರಿ said...

olleya kavanagalannu blog ge tandiddakke dhanyavaadagalu sir:)